Chinnaswamy stadium tickets
ಕರ್ನಾಟಕದಲ್ಲಿ ಕ್ರಿಕೆಟ್ ಫೀವರ್ ಶುರುವಾಗಿದೆ. ಅದರಲ್ಲೂ ಆರ್ಸಿಬಿ (RCB) ಮ್ಯಾಚ್ ಇದ್ದರಂತೂ, ಯಾವಾಗ ಮ್ಯಾಚ್ ಬರುತ್ತದೆ ಎಂದು ಜನ ಕಾತುರದಿಂದ ಕಾಯುತ್ತಿರುತ್ತಾರೆ. ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಈಗ ಹಬ್ಬದ ವಾತಾವರಣ ಮನೆ ಮಾಡಿದೆ.ನಮ್ಮ ನೆಚ್ಚಿನ ತಂಡದ ಮ್ಯಾಚ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್! ಈ ವರ್ಷದ ಪಂದ್ಯಕ್ಕೂ ಅದೇ ರೀತಿಯ ಹುಚ್ಚು ಅಭಿಮಾನ ಕಂಡುಬರುತ್ತಿದ್ದು, ಟಿಕೆಟ್ಗಾಗಿ ಜನ ಮುಗಿಬಿದ್ದಿದ್ದಾರೆ.
ಆನ್ಲೈನ್ನಲ್ಲಿ ಸರ್ವರ್ ಡೌನ್, ಆಫ್ಲೈನ್ನಲ್ಲಿ ಉದ್ದನೆಯ ಕ್ಯೂ!
ಐಪಿಎಲ್ ಮ್ಯಾಚ್ ಟಿಕೆಟ್ಗಳು ಆನ್ಲೈನ್ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ, ಹೆಚ್ಚು ಜನ ಒಮ್ಮೆಲೇ ಬುಕ್ ಮಾಡಲು ಮುಂದಾಗುವುದರಿಂದ ವೆಬ್ಸೈಟ್ಗಳು ಕ್ರ್ಯಾಶ್ ಆಗುತ್ತಿವೆ. ಸಾವಿರಾರು ಜನ ಒಂದೇ ಸಮಯದಲ್ಲಿ ಟಿಕೆಟ್ ಬುಕ್ ಮಾಡುತ್ತಿರುವುದರಿಂದ ಬಹುತೇಕರಿಗೆ ವೆಬ್ಸೈಟ್ನಲ್ಲಿ “Sold Out” ಬೋರ್ಡ್ ದರ್ಶನವಾಗುತ್ತಿದೆ.
ಇನ್ನು ಕೌಂಟರ್ನಲ್ಲಿ ಟಿಕೆಟ್ ಪಡೆಯಲು ಸ್ಟೇಡಿಯಂ ಹೊರಗಡೆ ಹಿಂದಿನ ದಿನ ರಾತ್ರಿಯಿಂದಲೇ ಅಭಿಮಾನಿಗಳು ಉದ್ದನೆಯ ಕ್ಯೂನಲ್ಲಿ ನಿಂತು ತಮ್ಮ ಕ್ರಿಕೆಟ್ ಪ್ರೇಮವನ್ನು ಮೆರೆದಿದ್ದಾರೆ.
ಹೇಗಿದೆ ಅಭಿಮಾನಿಗಳ ರಿಯಾಕ್ಷನ್?
- ಟಿಕೆಟ್ ಸಿಕ್ಕವರು ಮತ್ತು ಸಿಗದವರ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಆ ಪ್ರತಿಕ್ರಿಯೆಗಳ ಒಂದು ಸಣ್ಣ ಝಲಕ್ ಇಲ್ಲಿದೆ:
- ಟಿಕೆಟ್ ಸಿಗದವರ ನಿರಾಸೆ: “ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದೆವು, ನಮ್ಮ ಸರದಿ ಬರುವಷ್ಟರಲ್ಲಿ ಟಿಕೆಟ್ ಖಾಲಿ ಎಂದರು,” ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆನ್ಲೈನ್ನಲ್ಲಿ ಬುಕ್ ಮಾಡುವಾಗ ಪೇಮೆಂಟ್ ಆಗಿ ಟಿಕೆಟ್ ಕನ್ಫರ್ಮ್ ಆಗದವರ ಗೋಳು ಅಷ್ಟಿಷ್ಟಲ್ಲಬ್ಲಾಕ್ ಟಿಕೆಟ್ ಹಾವಳಿ: ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಟಿಕೆಟ್ಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ದಂಧೆ ನಡೆಯುತ್ತಲೇ ಇದೆ ಎಂಬ ಆರೋಪಗಳು ಅಭಿಮಾನಿಗಳಿಂದ ಕೇಳಿಬರುತ್ತಿವೆ
ನಿಮಗೂ ಟಿಕೆಟ್ ಸಿಕ್ತಾ?
ಕ್ರಿಕೆಟ್ ಎಂದರೆ ಕೇವಲ ಒಂದು ಆಟವಲ್ಲ, ಅದೊಂದು ಎಮೋಷನ್. ಸ್ಟೇಡಿಯಂ ಒಳಗೆ ಹೋಗಿ ಮ್ಯಾಚ್ ನೋಡುವ ಮಜಾನೇ ಬೇರೆ. ಹಾಗಾದರೆ, ಈ ಬಾರಿಯ ಮ್ಯಾಚ್ಗೆ ನಿಮಗೆ ಟಿಕೆಟ್ ಸಿಕ್ತಾ? ಅಥವಾ ಟಿವಿ/ಮೊಬೈಲ್ನಲ್ಲೇ ಮ್ಯಾಚ್ ನೋಡುವ ಪ್ಲಾನ್ ಮಾಡಿದ್ದೀರಾ? ಕಮೆಂಟ್ ಮೂಲಕ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ!
ಇಂದು RCB vs SRH: ಬೆಟ್ಟಿಂಗ್ಗೆ ಬಲಿಯಾಗದಿರಿ, ಕೇವಲ ಮನರಂಜನೆಗಾಗಿ ಆನಂದಿಸಿ!
ಇಂದು ಆರ್ಸಿಬಿ ಮತ್ತು ಎಸ್ಆರ್ಎಚ್ (RCB vs SRH) ನಡುವೆ ಹೈ-ವೋಲ್ಟೇಜ್ ಪಂದ್ಯವಿದ್ದು, ಮ್ಯಾಚ್ ಯಾವಾಗ ಶುರುವಾಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ಸಂಭ್ರಮದ ನಡುವೆ ನಮ್ಮದೊಂದು ಕಳಕಳಿಯ ವಿನಂತಿ: ದಯವಿಟ್ಟು ಕ್ರಿಕೆಟ್ ಅನ್ನು ಕೇವಲ ಮನರಂಜನೆಗಾಗಿ (Entertainment) ಮಾತ್ರ ನೋಡಿ ಆನಂದಿಸಿ. ಬೆಟ್ಟಿಂಗ್ ಆ್ಯಪ್ಗಳಿಗೆ (Betting Apps) ಮರುಳಾಗಿ ಹಣ ಕಳೆದುಕೊಳ್ಳಬೇಡಿ. ಶಾರ್ಟ್ಕಟ್ನಲ್ಲಿ ಹಣ ಮಾಡುವ ಆಸೆಗೆ ಬಿದ್ದು ಬೆಟ್ಟಿಂಗ್ನಲ್ಲಿ ತೊಡಗಿ ಸಾಲಗಾರರಾದರೆ, ನಿಮ್ಮಿಂದ ನಿಮ್ಮ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುತ್ತದೆ. ಹಾಗಾಗಿ ಯಾವುದೇ ಆಟವಿರಲಿ, ಅದು ಕೇವಲ ನಿಮ್ಮ ಸಂತೋಷಕ್ಕೆ ಮಾತ್ರ ಸೀಮಿತವಾಗಿರಲಿ.
ಅಗಲಿದ 11 ಅಭಿಮಾನಿಗಳಿಗೆ ಆರ್ಸಿಬಿಯ ಭಾವಪೂರ್ಣ ನಮನ
ಕಳೆದ 2025ರ ಐಪಿಎಲ್ನಲ್ಲಿ ಆರ್ಸಿಬಿ ಫೈನಲ್ ಗೆದ್ದ ಬಳಿಕ ನಡೆದ ಸಂಭ್ರಮಾಚರಣೆಯ (Celebration) ವೇಳೆ ದುರಾದೃಷ್ಟವಶಾತ್ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಆ ಕಹಿ ಘಟನೆಯನ್ನು ನೆನಪಿಸಿಕೊಂಡು ಮೃತಪಟ್ಟ ಆ 11 ಅಭಿಮಾನಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ, ಆರ್ಸಿಬಿ ಮ್ಯಾನೇಜ್ಮೆಂಟ್ ಈ ಬಾರಿ ಕ್ರೀಡಾಂಗಣದಲ್ಲಿ 11 ಸೀಟುಗಳನ್ನು ಖಾಲಿ ಬಿಟ್ಟಿದೆ. ಅಷ್ಟೇ ಅಲ್ಲದೆ, ಪ್ರಾಕ್ಟೀಸ್ ಮ್ಯಾಚ್ನಲ್ಲಿ ಆಟಗಾರರೆಲ್ಲರೂ 11ನೇ ನಂಬರ್ ಹೊಂದಿರುವ ಜರ್ಸಿ (Jersey) ಧರಿಸಿ ಅಭ್ಯಾಸ ನಡೆಸುವ ಮೂಲಕ ಅಗಲಿದ ಜೀವಗಳಿಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ಈ ಸಲ ಕಪ್ ನಮ್ದೇ” vs “ನಾವು 300 ರನ್ ಹೊಡೀತೀವಿ”
2026ರ ಐಪಿಎಲ್ (IPL 2026) ಶುರುವಾಗುತ್ತಿದ್ದಂತೆ, ಟೂರ್ನಿಯ ಮೊದಲನೇ ಪಂದ್ಯವಾದ ಆರ್ಸಿಬಿ ವರ್ಸಸ್ ಎಸ್ಆರ್ಎಚ್ ಮ್ಯಾಚ್ ನೋಡಲು ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಒಂದೆಡೆ ನಮ್ಮ ಆರ್ಸಿಬಿ ಅಭಿಮಾನಿಗಳು ಎಂದಿನಂತೆ ಗುಡುಗುತ್ತಾ “ಈ ಸಲ ಕಪ್ ನಮ್ದೇ” ಎಂದು ಹುರಿದುಂಬಿಸುತ್ತಿದ್ದರೆ, ಇನ್ನೊಂದೆಡೆ ಎಸ್ಆರ್ಎಚ್ ಫ್ಯಾನ್ಸ್ “ನಾವು ಈ ಬಾರಿ 300 ರನ್ ಬಾರಿಸುತ್ತೇವೆ” ಎಂದು ಸವಾಲು ಹಾಕುತ್ತಿದ್ದಾರೆ. ಇದೆಲ್ಲವೂ ಕ್ರಿಕೆಟ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ ಹಾಗೂ ಪಂದ್ಯದ ಮೇಲಿನ ನಿರೀಕ್ಷೆಯನ್ನು ನೂರ್ಮಡಿಗೊಳಿಸಿದೆ
ಹಾಗಾದರೆ ಇಂದಿನ ರೋಚಕ ಪಂದ್ಯದಲ್ಲಿ ಯಾರು ಗೆಲ್ಲಬಹುದು? ಮೈದಾನದಲ್ಲಿ ಯಾರ ಅಬ್ಬರ ಜೋರಾಗಿರಲಿದೆ? ನಿಮ್ಮ ಅನಿಸಿಕೆ ಹಾಗೂ ಬೆಂಬಲವನ್ನು ತಪ್ಪದೇ ನಮ್ಮ ಕಮೆಂಟ್ ಬಾಕ್ಸ್ನಲ್ಲಿ (Comment Box) ತಿಳಿಸಿ!
- ಹಳೆ ಶೂಗಳಿಂದ ಫ್ಯಾಷನ್ ಕ್ರಾಂತಿ: ಇನ್ಸ್ಟಾಗ್ರಾಮ್ ಮೆಸೇಜ್ಗೂ ರಿಪ್ಲೈ ಮಾಡದ ‘ಬ್ಯುಸಿ ಬಾಯ್’!
- ಸತ್ತ ಮೇಲೂ ದೇಶ ಕಾಯುವ ಸೈನಿಕ! ಇದು ಕಥೆಯಲ್ಲ, ಕಟು ಸತ್ಯ: ಕ್ಯಾಪ್ಟನ್ ಹರ್ಭಜನ್ ಸಿಂಗ್ ರಹಸ್ಯ
- GT vs RCB: ಆರ್ಸಿಬಿಗೆ ಆಧಾರವಾದ ‘ಫಿನಿಶರ್’ ಕೃನಾಲ್ ಪಾಂಡ್ಯ! ಮ್ಯಾಚ್ ಗೆಲ್ಲಿಸುವುದೇ ಇವರ DNA
- ಡೆಲ್ಲಿ ಬೌಲರ್ಗಳನ್ನು ಬೆಚ್ಚಿಬೀಳಿಸಿದ ಅಭಿಷೇಕ್ ಶರ್ಮಾ: ಹೈದರಾಬಾದ್ 242/2 ಬೃಹತ್ ಮೊತ್ತ!
- ಮೈಗ್ರೇನ್ (ಅರ್ಧ ತಲೆನೋವು): ಲಕ್ಷಣಗಳು, ಕಾರಣಗಳು ಮತ್ತು ತಕ್ಷಣದ ಪರಿಹಾರಕ್ಕೆ ಇಲ್ಲಿದೆ ಮನೆಮದ್ದು!